ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 27 ಪಿಐ, 7 ಡಿವೈಎಸ್ಪಿ ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, ಸ್ಥಳ ನಿರೀಕ್ಷೆಯಲ್ಲಿದ್ದಂತ ಡಿವೈಎಸ್ಪಿ ರಾಮಕೃಷ್ಣ ಕೆಜಿ ಅವರನ್ನು ಬಿಡಿಎಗೆ ವರ್ಗಾವಣೆ ಮಾಡಿದೆ.
ಡಾ.ವೀರಯ್ಯ ಹಿರೇಮಠ ಅವರನ್ನು ಬೆಳಗಾವಿಯ ಬೈಲಹೊಂಗಲ ಉಪ ವಿಭಾಗಕ್ಕೆ, ಡಾ.ಸಂತೋಷ್ ಕೆ.ಎಂ ಅವರನ್ನು ಪೊಲೀಸ್ ಪ್ರಧಾನ ಕಚೇರಿಯ ಕಾನೂನು ಶಾಖೆಗೆ, ಚಂದ್ರಶೇಖರ್.ಪಿ ಅವರನ್ನು ಕೊಡಗಿನ ಸೋಮವಾರಪೇಟೆ ಉಪ ವಿಭಾಗಕ್ಕೆ, ಪ್ರಕಾಶ್ ಕೆ.ಸಿ ಅವರನ್ನು ಮಂಗಳೂರು ದಕ್ಷಿಣ ಉಪ ವಿಭಾಗಕ್ಕೆ, ವೆಂಕಟೇಶ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ಹಾಗೂ ಮಹಾನಂದ ಹೆಚ್.ಕೆ ಅವರನ್ನು ಬೆಂಗಳೂರು ನಗರದ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.




