ಕೇಳಿದರೆ ಸಾಕು
ನಾಲ್ಕು ಜೈಕಾರ..
ನಾವೇ ಜಗಕೆಲ್ಲ
ಮಿರಮಿರ ಚಂದ್ರ.!
ಕಿವಿಗೆ ಬಿದ್ದರಾಯ್ತು
ಚಪ್ಪಾಳೆ ಝೇಂಕಾರ
ನಾವೇ ಲೋಕಕೆಲ್ಲ
ಝಗಮಗಿಸೊ ಇಂದ್ರ.!
ಒಮ್ಮೆ ಹತ್ತಿದರೆ
ತಲೆಗೆ ಅಹಂಕಾರ..
ಅಬ್ಬಬ್ಬಾ.! ಆರಂಭ
ನಾನಾ ಅವತಾರ.!
ಹಿರಿ-ಕಿರಿಯರೆಲ್ಲ
ತೃಣ ಸಮಾನ.!
ನಮಗಿಲ್ಲ ಇಲ್ಲಿ
ಯಾರೂ ಸರಿಸಮಾನ.!
ಎಲ್ಲರ ಕೆಕ್ಕರಿಸಿ
ಎಲ್ಲವ ಧಿಕ್ಕರಿಸಿ
ನಡೆವ ಹುಚ್ಚು.!
ಆತ್ಮವಿನಾಶಿ ಕಿಚ್ಚು.!
ಬಾವಿಗೆ ಕಾಣದು
ಸಾಗರದ ವಿಸ್ತಾರ.!
ನಾನೇ ಎಂಬುವಗೆ
ಸರ್ವವೂ ತಾತ್ಸಾರ.!
ಹಿಡಿದರೆ ಸಾಕು..
ಭ್ರಮೆಭ್ರಾಂತಿ ರೋಗ.
ಸರ್ವನಾಶವಾಗಲಿಕ್ಕೆ
ಏಕೈಕ ಮಾರ್ಗ.!
ತಲೆಯಾದರೆ ಭಾರ
ಬದುಕು ದುರ್ಭರ
ಕಂಗಳಿಗೆ ಬೆಳಕಿನ ಬರ
ಅರಿವಿರದ ಅಂಧಕಾರ.!
– ಎ.ಎನ್.ರಮೇಶ್. ಗುಬ್ಬಿ

[…] ಭಾರದ ಶಿರ.! […]
[…] ಭಾರದ ಶಿರ.! […]
[…] ಭಾರದ ಶಿರ.! […]