ಇದು ಮರಣ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ ಬದುಕುಳಿಯುವಿಕೆಯನ್ನು ಸುಧಾರಿಸುತ್ತದೆ. ಜೊತೆಗೆ, ಜೀವನದ ಗುಣಮಟ್ಟವನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ಅವರು ತಿಳಿಸಿದರು. ʻಡಯಾಲಿಸಿಸ್ʼಪ್ರಕ್ರಿಯೆಯು ರೋಗಿಯು ಬದುಕುಳಿಯಲು ನೆರವಾಗುತ್ತದೆಯಾದರೂ, ದೀರ್ಘಕಾಲೀನವಾಗಿ ಫಲಿತಾಂಶಗಳು ಅಪೇಕ್ಷಣೀಯವಾಗಿರುವುದಿಲ್ಲ.ಅದೇ ಮೂತ್ರಪಿಂಡ ಕಸಿ ಮಾಡಿದಲ್ಲಿ,ರೋಗಿಗಳಿಗೆ ಕೇವಲ 2-3 ತಿಂಗಳಲ್ಲಿ ಕೆಲಸಕ್ಕೆ ಮರಳಲು ಅವಕಾಶವನ್ನು ದೊರೆಯುತ್ತದೆ, ಇದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತೆ ಉತ್ಪಾದಕ ಜೀವನವನ್ನು ಆರಂಭಿಸಲು ಅನುವು ಮಾಡಿಕೊಡುತ್ತದೆ,ʼʼಎಂದು ಹೇಳಿದರು.
ಇದನ್ನು ಓದು: ತುಮಕೂರು : ಅಖಿಲ ಭಾರತ ಡಾ||ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿ ನಿಬ್ಬಾಣ್ ದಿವಸ್ ಆಚರಣೆ
ಧಾರ್ಮಿಕ ನಂಬಿಕೆಗಳು, ಆರೋಗ್ಯ ರಕ್ಷಣೆಯಲ್ಲಿ ಅಪನಂಬಿಕೆ ಮತ್ತು ಕುಟುಂಬ ನಿರ್ಧಾರದ ಒತ್ತಡಗಳು ಸಹ ಪ್ರಮುಖ ಅಡೆತಡೆಗಳಾಗಿ ಉಳಿದಿವೆ. ಇದಲ್ಲದೆ,ವೈದ್ಯಕೀಯ-ಕಾನೂನು ಔಪಚಾರಿಕತೆಗಳು, ವಿಶೇಷವಾಗಿ ಅಪಘಾತ ಪ್ರಕರಣಗಳಲ್ಲಿ ಕಡ್ಡಾಯ ಮರಣೋತ್ತರ ಪರೀಕ್ಷೆಯು ದೇಹವನ್ನು ಹಸ್ತಾಂತರಿಸುವಲ್ಲಿ ವಿಳಂಬಕ್ಕೆ ಕಾರಣವಾಗುತ್ತವೆ. ಕುಟುಂಬಗಳು ದಾನಕ್ಕೆ ಒಪ್ಪಿಗೆ ನೀಡುವುದನ್ನು ನಿರುತ್ಸಾಹಗೊಳಿಸುತ್ತವೆ,ʼʼಎಂದುಹೇಳಿದರು.
– ಕೆ.ಬಿ.ಚಂದ್ರಚೂಡ

[…] […]
[…] […]