ಚೆನ್ನೈ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಚೆನ್ನೈನಲ್ಲಿ ಹಾಡಹಾಗಲೇ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹ*ತ್ಯೆ ಮಾಡಿದ್ದಾರೆ.
ಚೆನ್ನೈನಲ್ಲಿ ಹಾಡಹಗಲೇ ಹೆದ್ದಾರಿಯಲ್ಲಿ ಕೆಲವು ಆಕ್ರಮಣಕಾರರು ಕ್ರೂರವಾಗಿ ಹ*ತ್ಯೆ ಮಾಡಿದ್ದು, ಚಾಕುಗಳಿಂದ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದ್ದು. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ತಮಿಳುನಾಡಿನ ಸೇಲಂ-ನಾಸಿಯಾನೂರು ಹೆದ್ದಾರಿಯಲ್ಲಿ ಹಾಡಹಗಲೇ ಭೀಕರ ಹತ್ಯೆ ನಡೆದಿದೆ. ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಭೀಕರ ದಾಳಿಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಾರಿಹೋಕರು ಭಯಭೀತರಾಗಿ ನೋಡುತ್ತಿದ್ದರು.
ತಿರುಪ್ಪೂರಿನ ಪೆರಿಯಪಾಳ್ಯಂ ನಿವಾಸಿಯಾದ 35 ವರ್ಷದ ಚಾಣಕ್ಯ ಅಲಿಯಾಸ್ ಜಾನ್ ಹತ್ಯೆಯಾದ ದುರ್ದೈವಿ. ಸೇಲಂನಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ವಾಹನ ಮಾರಾಟ ಮತ್ತು ಸಾಲದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಜಾನ್ನ ಕಾರಿಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆದು ನಾಸಿಯಾನೂರು ಬಳಿ ನಿಲ್ಲುವಂತೆ ಮಾಡಲಾಯಿತು.
ನಾಲ್ವರು ವ್ಯಕ್ತಿಗಳು ಕಾರಿನಿಂದ ಹೊರಬಂದು ಆತನ ಪತ್ನಿ ಶರಣ್ಯಳನ್ನು ಪಕ್ಕಕ್ಕೆ ತಳ್ಳಿ ಚಾಣಕ್ಯನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತನ್ನ ಪತಿಯ ಜೀವ ಉಳಿಸುವಂತೆ ಶರಣ್ಯ ಎಷ್ಟೇ ಬೇಡಿಕೊಂಡರೂ ದಾಳಿಕೋರರು ದಾಳಿ ಮುಂದುವರಿಸಿದರು. ಗಂಭೀರವಾಗಿ ಗಾಯಗೊಂಡ ಜಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾದರು.
ಸಿತೋಡು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಪೆರುಂದುರೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತನಿಖೆ ಆರಂಭಿಸಿದ್ದು, ಮೂವರು ಆರೋಪಿಗಳಾದ ಸರೀಶ್, ಶರವಣನ್ ಮತ್ತು ಭೂಪಾಲನ್ ಅವರನ್ನು ಬೆನ್ನಟ್ಟಿ ಗುಂಡು ಹಾರಿಸಿ ಬಂಧಿಸಿದರು. ನಾಲ್ಕನೇ ಶಂಕಿತ ಕಾರ್ತಿಕ್ ನಂತರ ಬಂಧನಕ್ಕೊಳಗಾದನು. ಹತ್ಯೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.
