ಅಧ್ಯಾಯ-1
ಶ್ಲೋಕ – 24
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ॥೨೪॥
ಸಂಜಯನು ಹೇಳಿದನು: ಓ ಭರತ ವಂಶದ ದೊರೆಯೇ, ಗುಡಾಕೇಶನ ಮಾತನ್ನು ಆಲಿಸಿದ ಹೃಷೀಕೇಶಃ, ಎರಡು ಸೈನ್ಯದ ಮಧ್ಯೆ ಹಿರಿಯ ತೇರನ್ನು ನಿಲ್ಲಿಸಿದ.
ಇಂದ್ರಿಯದ ದೊರೆಯಾದ ಶ್ರೀಕೃಷ್ಣನು ಏನೂ ಮಾತನಾಡದೆ, ರಥವನ್ನು ಎರಡೂ ಸೈನ್ಯದ ಮಧ್ಯೆ ನಿಲ್ಲಿಸಿದ. ಇಲ್ಲಿಂದ ಮುಂದೆ ನಾವು ಶ್ರೀಕೃಷ್ಣನ ಪ್ರತಿಯೊಂದು ನಡೆಯಲ್ಲಿ ಮನಃಶಾಸ್ತ್ರೀಯ ಚಿಕಿತ್ಸಾ ಪದ್ಧತಿಯನ್ನು(Psychotherapy) ಕಾಣಬಹುದು. ಅಹಂಕಾರವೆನ್ನುವುದು ಒಂದು ಮಾನಸಿಕ ಸ್ಥಿತಿ. ನಾವು ಅಂತಹ ಸ್ಥಿತಿಯಿಂದ ಹೊರ ಬರಬೇಕಾದರೆ, ನಮಗೆ ಮಾನಸಿಕ ಚಿಕಿತ್ಸೆ ಬೇಕು. ಅದನ್ನೇ ಕೃಷ್ಣ ಇಲ್ಲಿ ಮಾಡಿ ತೋರಿಸಿದ್ದಾನೆ. ಇಂತಹ ಶ್ರೀಕೃಷ್ಣನನ್ನು ನಾವು ಮನಃಶಾಸ್ತ್ರದ ಪಿತಾಮಹ(Father of Psychology) ಎಂದರೆ ತಪ್ಪಾಗದು. ಮನಃಶಾಸ್ತ್ರದ ಅನೇಕ ವಿಷಯಗಳು ಗೀತೆಯ ಮೊದಲ ಅಧ್ಯಾಯದಲ್ಲೇ ಅಡಗಿದೆ.
ಈ ಶ್ಲೋಕದಲ್ಲಿ ಕೃಷ್ಣನನ್ನು ಹೃಷೀಕೇಶಃ ಎಂದೂ ಹಾಗು ಅರ್ಜುನನನ್ನು ಗುಡಾಕೇಶನೆಂದೂ ಸಂಬೋಧಿಸಿದ್ದಾರೆ. ಗುಡಾಕೇಶ ಎಂದರೆ ನಿದ್ದೆಯನ್ನು ಗೆದ್ದವನು ಎಂದರ್ಥ.

[…] […]