ಕೆ.ಆರ್.ಪೇಟೆ – ತಾಲ್ಲೂಕಿನ ಅಗಸರಹಳ್ಳಿ ಗ್ರಾಮದ ಜ್ಞಾನೇಶ್ ರಶ್ಮಿ ದಂಪತಿಗಳ ಪುತ್ರಿ ಧೃತಿ.ಜೆ ಅವರು ಕೆ.ಆರ್.ಪೇಟೆಯ ಸಾಹುಕಾರ್ ಚಿಕ್ಕಣ್ಣಗೌಡ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಧೃತಿ. 625ಕ್ಕೆ 625 ಅಂಕ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಧೃತಿ ತಂದೆ ಜ್ಞಾನೇಶ್ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ರಶ್ಮಿ ಕೂಡಾ ಸರ್ಕಾರಿ ಶಾಲೆಯ ಶಿಕ್ಷಕಿ.ಧೃತಿಯ ಸಾಧನೆಗೆ ವಿವಿಧ ಪಕ್ಷದ ಮುಖಂಡರು ಸಂಘ ಸಂಸ್ಥೆಗಳು ಸೇರಿದಂತೆ ಧೃತಿಗೆ ಶುಭ ಹಾರೈಸಿದ್ದಾರೆ.
