ಹಾಸನ: ನಕಲಿ ದಾಖಲೆ ಸೃಷ್ಟಿಸಿ ಕೆರೆ ಕಬಳಿಸಲು ಯತ್ನ – ಶ್ರವಣೂರು ಗ್ರಾಮಸ್ಥರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದ ಕೆರೆ ಭೂಮಿಯನ್ನು ನಕಲಿ ದಾಖಲೆ ಮೂಲಕ ಲಪಟಾಯಿಸಲು ಯತ್ನವಾಗುತ್ತಿದೆ ಎಂಬ ಆರೋಪದೊಂದಿಗೆ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಬಗ್ಗೆ 2018 ರಲ್ಲಿಯೇ ಎಸಿ ಕೋರ್ಟ್ ಅರ್ಜಿ ವಜಾ ಮಾಡಿತ್ತು ಎಂಬುದರ ಬಗ್ಗೆ ಪ್ರತಿಭಟನಾಕಾರರು ಜೋರಾಗಿ ಆಕ್ಷೇಪ ವ್ಯಕ್ತಪಡಿಸಿದರು.