ಹಾಸನ- ಜಗಕ್ಕೆ ಕನ್ನಡದ ಕೀರ್ತಿ ಹರಡಿದ ಬಾನು ಮುಷ್ತಾಕ್‌ಗೆ ನಾಗರಿಕ ಸನ್ಮಾನ

ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರಿಗೆ ಹಾಸನದಲ್ಲಿ ವಿಜೃಂಭಣೆಯ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು. ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಸಾಹಿತಿಗಳು ಭಾಗವಹಿಸಿ ಪ್ರಶಂಸೆಗಳ ಸುರಿಮಳೆಯನ್ನೆ ಹಾರಿಸಿದರು. ‘ಎದೆಯಹಣತೆ’ ಕೃತಿಯ ಮೂಲಕ ಬಾನುಮೆಡಂ ಕನ್ನಡದ ಹೆಗ್ಗಳಿಕೆಗೆ ಜಾಗತಿಕ ಪ್ರಭಾವವನ್ನು ತಂದುಕೊಟ್ಟಿದ್ದಾರೆ.