ಹಾಸನ:ಜೂ.21 ರಂದು ತುಮಕೂರಿನಲ್ಲಿ ಜಿಲ್ಲಾ ಸಚಿವ ಕೆ.ಎನ್. ರಾಜಣ್ಣರ ಅಮೃತ ಮಹೋತ್ಸವ, ಗ್ರಂಥ ಬಿಡುಗಡೆ ಪುತ್ರನಿಂದ ನಗರದಲ್ಲಿ ಪೂರ್ವಭಾವಿ ಸಭೆ

ತುಮಕೂರಿನಲ್ಲಿ ಜೂನ್ 21ರಂದು ನಡೆಯಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣರವರ ಅಮೃತ ಮಹೋತ್ಸವ ಹಾಗೂ ಗ್ರಂಥ ಬಿಡುಗಡೆಯ ಹಿನ್ನೆಲೆಯಲ್ಲಿ, ಹಾಸನ ಪ್ರವಾಸಿ ಮಂದಿರದಲ್ಲಿ ಅವರ ಪುತ್ರ ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ಯೋಜನೆ, ಜನಸಾಮಾನ್ಯರ ಆಹ್ವಾನ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯ ಕುರಿತು ಚರ್ಚಿಸಲಾಯಿತು.