ಹಾಸನ: ಹೃದಯಾಘಾತ ನಿರ್ವಹಣೆಗೆ ಮೆಗಾ ತಪಾಸಣಾ ಶಿಬಿರ, ವೈದ್ಯರ ನೇಮಕ ಸೇರಿದಂತೆ ತಕ್ಷಣದ ಕ್ರಮ ಅಗತ್ಯ – ಎಚ್.ಡಿ. ರೇವಣ್ಣ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಮಟ್ಟದಲ್ಲೂ ತಪಾಸಣಾ ಉಪಕರಣಗಳ ಅಗತ್ಯವಿದೆ ಎಂದು ಉಲ್ಲೇಖಿಸಿ, ಜಯದೇವ ಮಾದರಿಯಲ್ಲಿ ಹಾಸನದಲ್ಲಿ ಘಟಕ ಸ್ಥಾಪನೆಗಾಗಿ 25 ಕೋಟಿ ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಸ್ಥಳೀಯ ಶಾಸಕರು, ಹಿಮ್ಸ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ವೈದ್ಯರ ಕೊರತೆ, ಖಾಸಗಿ ಆಸ್ಪತ್ರೆಗಳ ದುರ್ಬಳಕೆ, ಸರಕಾರಿ ಅನುದಾನ ತರುವ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಯಿತು.
Copy and paste this URL into your WordPress site to embed
Copy and paste this code into your site to embed