ಹಾಸನ: ದೂರವಾಣಿ ನಗರ ದೇವಾಲಯದಲ್ಲಿ ಮರುಕಳಿಸಿದ ಕಳ್ಳತನ, ಭದ್ರತೆ ಕುಸಿತದ ಬಗ್ಗೆ ಸಾರ್ವಜನಿಕ ಆಕ್ರೋಶ

ಹಾಸನ ಜಿಲ್ಲೆಯ ದೂರವಾಣಿ ನಗರದ ಬಿ. ಕಾಟಿಹಳ್ಳಿಯ ಪಂಚಮುಖಿ ಗಣಪತಿ, ಸುಬ್ರಮಣ್ಯ ಮತ್ತು ನವಗ್ರಹ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರು ಬಾಗಿಲು ಮುರಿದು ನುಗ್ಗಿದ್ದು, ಸುಮಾರು 1 ಲಕ್ಷ ರೂ.ಮಟ್ಟದ ನಗದು ಕಳವಾಗಿದೆ. ಒಂದೇ ವರ್ಷದಲ್ಲಿ ಮೂರನೇ ಬಾರಿ ಈ ದೇವಾಲಯದಲ್ಲಿ ಕಳ್ಳತನವಾಗಿದ್ದು, ಭದ್ರತಾ ಕೊರತೆಯ ವಿರುದ್ಧ ಸ್ಥಳೀಯರು ಪೊಲೀಸರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.