ಕನ್ನಡ ಶಾಲೆಗಳಲ್ಲಿ ಮಲಯಾಳಂ ಪ್ರಥಮ ಭಾಷೆ- ಮತ್ತೊಮ್ಮೆ ಭುಗಿಲೆದ್ದ ಭಾಷಾ ವಿವಾದ
ಕಾಸರಗೋಡು ವಿಚಾರವಾಗಿ ಕರ್ನಾಟಕ ಹಾಗೂ ಕೇರಳ ನಡುವೆ ಮತ್ತೊಮ್ಮೆ ಭಾಷಾ ಸಮರ ಭುಗಿಲೆದ್ದಿದೆ. ಕರ್ನಾಟಕ ಮತ್ತು ಕೇರಳ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಕನ್ನಡ ಮಧ್ಯಮ ಶಾಲೆಗಳಿಗೆ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯ ಮಾಡಬೇಕು ಎಂಬ ಮಸೂದೆ ವಿರುದ್ಧ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಕೇರಳದ ಕನ್ನಡ ಮಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ -2025 ಭಾಷಾ ಸ್ವಾತಂತ್ರ್ಯದ ಮೇಲೆ ಪ್ರಹಾರವಾಗಿದೆ. ತಕ್ಷಣ ಇದನ್ನು ಹಿಂಪಡೆಯಬೇಕು ಎಂದು ಕೇರಳ ಸಿಎಂ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸಿದರು.
ಭಾಷಾ ವಿವಾದದಿಂದ ಗಡಿನಾಡು ಪ್ರದೇಶಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಅದರಲ್ಲೂ ಕಾಸರಗೋಡು ಜಿಲ್ಲೆಯ ಕನ್ನಡಿಗರ ಹಿತಾಸಕ್ತಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕಾಸರಗೋಡಿನಲ್ಲಿ 7.5ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಧ್ಯಮ ಶಾಲೆಗಳಿವೆ. ಸಂವಿಧಾನದ 35ಬಿ ವಿಧಿಯ ನಿಬಂಧನೆಗಳಡಿ, ಕೇರಳ ಸರ್ಕಾರ ಕಳುಹಿಸಿರುವ ಮಸೂದೆಗೆ ಅನುಮೋದನೆ ನೀಡದಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಮಸೂದೆಯಲ್ಲೇನಿದೆ ? : ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್ ಡಿ ಎಫ್ ಸರ್ಕಾರ 2025ರ ಅಕ್ಟೋಬರ್ 6ರಂದು. ವಿಧಾನಸಭೆಯಲ್ಲಿ ಮಲಯಾಳಂ ಭಾಷಾ ಮಸೂದೆ -2025ನ್ನು ಅಂಗೀಕರಿಸಿದ್ದು, ಮಸೂದೆ ಈಗ ರಾಜ್ಯಪಾಲರ ಅಂಗೀಕಾರಕ್ಕಾಗಿ ಕಾಯುತ್ತಿದೆ.
ಪ್ರಸ್ತುತ ಕೇರಳ ರಾಜ್ಯದಲ್ಲಿ ಇಂಗ್ಲಿಷ್. ಮತ್ತು ಮಲಯಾಳಂ ಎರಡನ್ನೂ ಅಧಿಕೃತ ಭಾಷೆಗಳನ್ನಾಗಿ ಗುರುತಿಸಲಾಗಿದೆ. ಆದರೆ, ಈ ಮಸೂದೆ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡಲಿದ್ದು,ಸರ್ಕಾರ, ಶಿಕ್ಷಣ, ನ್ಯಾಯಾಂಗ, ಸಾರ್ವಜನಿಕ ಸಂವಹನ, ವಾಣಿಜ್ಯ ಮತ್ತು ಡಿಜಿಟಲ್ ಡೊಮೇನ್ನಾದ್ಯಂತ ಅದರ ಬಳಕೆಯನ್ನು ಕಡ್ಡಾಯಗೊಳಿಸುತ್ತದೆ. ಇದರಿಂದ ಕೇರಳದ ಕನ್ನಡ ಮಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯವಾಗಲಿದೆ.

ಏನಿದು ವಿವಾದ ? :
- ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಅಂಗೀಕರಿಸಿದ್ದು, ರಾಜ್ಯಪಾಲರ ಒಪ್ಪಿಗೆ ಬಾಕಿ ಇದೆ
- ಆ ವಿಧೇಯಕ ದ ಪ್ರಕಾರ ಕಾಸರಗೋಡಿನ ಕನ್ನಡ ಶಾಲೆಗಳಲ್ಲೂ ಮಲಯಾಲಂ ಪ್ರಥಮ ಭಾಷೆ ಆಗಲಿದೆ
- ಅದನ್ನು ಕಡ್ಡಾಯವಾಗಿ ಕಲಿಸಬೇಕು. ಇದು ಭಾಷಾ ಅಲ್ಪಸಂಖ್ಯಾತ್ರ ಮೇಲಿನ ಪ್ರಹಾರ ಎಂದು ಆಕ್ರೋಶ
- ಕಾಸರಗೋಡಿನಲ್ಲಿ 7.5ಲಕ್ಷ ಕನ್ನಡಿಗರು,210 ಕನ್ನಡ ಮಾಧ್ಯಮ ಶಾಲೆಗಳಿವೆ ಎಂಬುದು ಗಮನಾರ್ಹ
ಪಿರಣಾಯಿ ತಗಾದೆ
- 2017ರಲ್ಲೂ ಇದೇ ರೀತಿ ಮಲಯಾಳಂ ಕಡ್ಡಾಯ ಮಸೂದೆಯನ್ನು ಕೇರಳ ಸರ್ಕಾರ ಅಂಗೀಕರಿಸಿತ್ತು
- ಆ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿರಲಿಲ್ಲ. ಕೇಂದ್ರ ಸರ್ಕಾರದಿಂದಲೂ ಆಕ್ಷೇಪ ವ್ಯಕ್ತ ಆಗಿತ್ತು
- 2022ರಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಂ ಶಿಕ್ಷಕರನ್ನು ಕೇರಳ ನೇಮಕ ಮಾಡಿತ್ತು
- ವಿರೋಧದ ಬಳಿಕ ವಾಪಸ್ ಪಡೆದಿತ್ತು. ಈ ಎಲ್ಲಾ ಘಟನೆ ನಡೆದಿರುವುದು ಪುನರಾಯಿ ಸಿಎಂ ಆದ ಬಳಿಕ
ಇದನ್ನು ವಿರೋಧಿಸಿ ಕರ್ನಾಟಕದ ಕನ್ನಡ ಸಂಘಟನೆಗಳು ಗಡಿ ಹೋರಾಟ ಸಮಿತಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ಆಯೋಜಿಸಿವೆ ಅಲ್ಲದೆ ಸಂವಿಧಾನದ 29,30,350A ವಿಧಾನಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಕೇರಳ ಗವರ್ನರ್ ಬಳಿ ಮನವಿಯನ್ನು ಸಲ್ಲಿಸಲಾಗಿದೆ.
ಇದರಿಂದಾಗಿ ಕನ್ನಡಿಗರ ಮೇಲೆ ಪರಭಾಷಾ ಹೇರಿಕೆಯಿಂದ ನಮ್ಮ ಸಾಂಸ್ಕೃತಿಕ ಗುರುತು ನಷ್ಟವಾಗುತ್ತದೆ ಅಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡ , ಕನ್ನಡ ಅಳಿವು ಆಗುವ ಸ್ಥಿತಿ, ಅಲ್ಲದೆ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಬಹುದು.
ಇದರ ಬೆಳವಣಿಗೆ ಕುರಿತು ಕರ್ನಾಟಕ ಬಾರ್ಡರ್ ಏರಿಯಾ ಡೆವಲಪ್ಮೆಂಟ್ ಅಥೋರಿಟಿ ಕೇರಳದ ಮಲಯಾಳಂ ಭಾಷಾ ಬಿಲ್ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳುತ್ತಿದೆ. ಗೌರ್ನರ್ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಬಳಿ ಮನವು ಸಲ್ಲಿಸಿ ಬಿಲ್ ಪುನರ್ ಪರಿಶೀಲನೆಗೆ ಒತ್ತಡ ಹಾಕಲಾಗಿದೆ.

