ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಅಲ್ಲಮಪ್ರಭು ಅವರು ಬಳ್ಳಿಗಾವಿಯಲ್ಲಿ ಜನಿಸಿ, ‘ಅನುಭವ ಮಂಟಪ’ದ ಅಧ್ಯಕ್ಷರಾಗಿದ್ದರು. ಅವರ ಅಂಕಿತನಾಮ ‘ಗುಹೇಶ್ವರ’. ಹರಿಹರನ ಪ್ರಕಾರ ಅವರ ಪತ್ನಿ ವಿದ್ಯುಲ್ಲತೆ, ಚಾಮರಸನ ಪ್ರಕಾರ ಛಾಯಾದೇವಿ. ಅವರ ವಚನಗಳಲ್ಲಿ ಹೆಣ್ಣು, ಹೊನ್ನು, ಮಣ್ಣು ಇವೆರಡಕ್ಕೂ ಒದ್ದುಗೂಡಿರುವ ಆಸೆಗಳನ್ನೇ ನಿಜವಾದ ಮಾಯೆ ಎಂದು ಪ್ರತಿಪಾದಿಸಿದ್ದಾರೆ. ಸಮಗ್ರ ವಚನ ಸಂಪುಟದ ಪ್ರಕಾರ ಅವರು 1870 ವಚನಗಳನ್ನು ರಚಿಸಿದ್ದಾರೆ. ‘ಅಲ್ಲಮನ ವಚನಗಳು’ ಕೃತಿಯನ್ನು ಡಾ. ಎಲ್. ಬಸವರಾಜು ರಚಿಸಿದ್ದಾರೆ. ಅಲ್ಲಮಪ್ರಭು, ಫ.ಗು.ಹಳಗಟ್ಟಿ ಅವರ ಪ್ರಕಾರ ಕನ್ನಡದ ನಾಲ್ಕು ನಾಯಕರತ್ನರಲ್ಲಿ ಒಬ್ಬರಾಗಿದ್ದಾರೆ.