ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ದುರ್ಗಸಿಂಹನು 11ನೇ ಶತಮಾನದ ಕನ್ನಡ ಪಂಡಿತನಾಗಿ ಖ್ಯಾತಿ ಪಡೆದವನಾಗಿದ್ದು, ಪಂಚತಂತ್ರವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಮಹಾನ್ ಸಾಹಿತಿಯೆನಿಸಿಕೊಳ್ಳುತ್ತಾರೆ. ಶಾಮಾಚಾರ್ಯ ಮತ್ತು ದೇವಾಂಬಿಕೆಯ ಪುತ್ರನಾಗಿದ್ದ ದುರ್ಗಸಿಂಹನು ಶಂಕರಭಟ್ಟನ ಶಿಷ್ಯನಾಗಿದ್ದು, ಜಗದೇಕಮಲ್ಲನ ಆಸ್ಥಾನದಲ್ಲಿ ಸಂಧಿವಿಗ್ರಹಿಯಾಗಿ ಸೇವೆ ಸಲ್ಲಿಸಿದ್ದ. ಚಂಪೂ ಕಾವ್ಯ ರೂಪದಲ್ಲಿ ರಚಿಸಿದ ಪಂಚತಂತ್ರ 457 ಪದ್ಯಗಳು ಮತ್ತು 230 ಶ್ಲೋಕಗಳನ್ನು ಒಳಗೊಂಡಿದ್ದು, ಮೃಗಪಕ್ಷಿಗಳ ಮೂಲಕ ನೈತಿಕತೆ ಸಾರುವ 48 ಉಪಕಥೆಗಳನ್ನು ಒಳಗೊಂಡಿದೆ