ಮೈಸೂರು : ಪ್ರೀತಿ ವಿಚಾರಕ್ಕೆ ಜಗಳ ನಡೆದು ಪಾಗಲ್ ಪ್ರೇಮಿಯೋರ್ವ ಶಿಕ್ಷಕಿಗೆ ಚಾಕು ಇರಿದು ಕೊಲೆಗೈದ ಘಟನೆ ಅಶೋಕಪುರಂ ನಲ್ಲಿ ನಡೆದಿದೆ.
ಮೃತರನ್ನು ಪಾಂಡವಪುರದ ಎಲೆಕೆಡೆ ಹ್ಯಾಂಡ್ ಪೋಸ್ಟ್ ಮೂಲದ ಪೂರ್ಣಿಮ (36) ಎಂದು ಗುರುತಿಸಲಾಗಿದೆ. ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಶಿಕ್ಷಕಿಯನ್ನು ಕೊಂದು ಜೈಲು ಸೇರಿದ್ದಾನೆ.
ಪ್ರೀತಿ ವಿಚಾರಕ್ಕೆ ಅಭಿಷೇಕ್ ನಿನ್ನೆ ಪೂರ್ಣಿಮ ಜೊತೆ ಜಗಳವಾಡಿದ್ದಾನೆ ನಂತರ ಜಗಳ ತಾರಕಕ್ಕೇರಿದ್ದು, ಶಿಕ್ಷಕಿಗೆ ಚಾಕು ಇರಿದು ಅಭಿಷೇಕ್ ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪೂರ್ಣಿಮ ಮೃತಪಟ್ಟಿದ್ದಾರೆ.
