ಟಿ.ನರಸೀಪುರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ – ಬಲಗೈ ಸಮುದಾಯಕ್ಕೆ ಅನ್ಯಾಯವೆಂದು ಪರಿಶಿಷ್ಟ ಮಹಾಸಭಾ ಆಕ್ರೋಶ

ಟಿ.ನರಸೀಪುರದಲ್ಲಿ ಅಖಿಲ ಕರ್ನಾಟಕ ಪರಿಶಿಷ್ಟ ಮಹಾಸಭಾ ರಾಜ್ಯಾಧ್ಯಕ್ಷ ಸೋಸಲೆ ಶಶಿಕಾಂತ್ ಅವರು ಸಿಎಂ ಸಿದ್ದರಾಮಯ್ಯ ಬಲಗೈ ಸಮುದಾಯವನ್ನು ಹೊಡೆಯಲು ಸಾಹಿತಿ ದೇವನೂರು ಮಹದೇವ್ ಅವರನ್ನು ಬಳಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ನಾಗಮೋಹನ್ ದಾಸ್ ವರದಿಯಲ್ಲಿರುವ ದತ್ತಾಂಶದಲ್ಲಿ ತಪ್ಪು, ಬಲಗೈ ಸಮುದಾಯಕ್ಕೆ ಅನ್ಯಾಯ ನಡೆದಿದೆ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.