ತುಮಕೂರು: ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಸಿಟಿ ಕ್ಲಬ್ ಅಂಗಳದಲ್ಲಿ ಶಟಲ್ ಬ್ಯಾಡ್ಮಿಂಟನ್ ಆಡಿದರು. ಪಂದ್ಯದಲ್ಲಿ ಯಾರೊಬ್ಬರೂ ಗೆಲ್ಲಲಿಲ್ಲ, ಸೋಲಲೂ ಇಲ್ಲ. ಆದರೆ ವೀಕ್ಷಕರ ಮನಸ್ಸು ಗೆದ್ದರು!
ನಗರದ ಶಿರಾ ಗೇಟ್ನ ಸಿಟಿ ಕ್ಲಬ್ನಲ್ಲಿ ನವೀಕರಣಗೊಂಡಿರುವ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಅನ್ನು ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್ ಅವರು ಬ್ಯಾಂಡ್ಮಿಂಟನ್ ಆಡಿ ಉದ್ಘಾಟನೆ ಮಾಡಿದರು. ಇದೇ ವೇಳೆ ಕ್ಲಬ್ನಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಡ್ಸ್ ರೂಮ್ ಹಾಗೂ ಅತಿಥಿ ಕೊಠಡಿಗಳನ್ನೂ ಉದ್ಘಾಟಿಸಿದರು.

ಸಿಟಿ ಕ್ಲಬ್ ಅಧ್ಯಕ್ಷ ಟಿ.ಎಸ್.ಪೃಥ್ವಿಪ್ರಸಾದ್, ಉಪಾಧ್ಯಕ್ಷ ಹೆಚ್.ಎಂ.ರವೀಶ್, ಗೌರವ ಕಾರ್ಯದರ್ಶಿ ಜಿ.ನಾಗರಾಜ್, ಖಜಾಂಚಿ ಟಿ.ವೈ.ಉದಯಕುಮಾರ್, ನಿರ್ದೇಶಕರಾದ ಟಿ.ಜಿ.ಚಂದ್ರಶೇಖರ್, ಎಚ್.ಆರ್.ಶಿವಶಂಕರ್, ಟಿ.ಎಸ್.ಜಗಜ್ಯೋತಿ ಸಿದ್ಧರಾಮಯಯ್ಯ, ಜಿ.ಎಸ್.ಅಭಿನಂದನ್, ಕೆ.ಎಸ್.ಸುರೇಶ್ ಹಾಗೂ ಸದಸ್ಯರು ಈ ವೇಳೆ ಹಾಜರಿದ್ದರು.
– ಕೆ.ಬಿ.ಚಂದ್ರಚೂಡ

[…] […]