ಹನಿಮೂನ್ ನನಗೆ ಸಿಹಿಯಲ್ಲ
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ
ಮಳೆ ಬರಲೆಂದು ನಮ್ಮೂರ ಮಂದಿ
ಕಡಿದರು ಮಾರಿಗೆ ನೂರಾರು
ಕುರಿ ಕೋಳಿ ಹಂದಿ
ಹರಿದ ರಕ್ತ ನೋಡಿ
ಸುರಿಸಿದ ಮಳೆರಾಯ
ಕಣ್ಣೀರ ಕೋಡಿ
ನಮ್ಮೂರ ಕೆರೆಗೆ ಮಳೆಯ ಹನಿಗಳು ಸೇರಿ
ತುಂಬಿದ ಒಡಲಲ್ಲಿ
ನವಮಾಸಗಳ ಸಿರಿ
ಮಳೆ ಬಿದ್ದಲ್ಲಿ ನದಿ ಉಕ್ಕಿ
ಜಲಾಶಯಕ್ಕೆ ಒಳ ಹರಿವು ಹೆಚ್ಚು
ಹಸಿರು ಕ್ರಾಂತಿಗೆ ಕೆರೆ ಕಟ್ಟೆ ಕಟ್ಟಿಸಿ
ಒಳ ಅರಿವು ಹೆಚ್ಚು
__

ಗೊರೂರು ಅನಂತರಾಜು,
ಹಾಸನ
9449462879
ವಿಳಾಸ: ಹುಣಸಿನಕೆರೆ ಬಡಾವಣೆ
29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ – 573201
