Shravan: ಶ್ರಾವಣಮಾಸವನ್ನು ಇಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಹನ್ನಗಳು, ಪೂಜೆ, ಉಪವಾಸಗಳು, ಪೂಜೆಗಳು ಮತ್ತು ಶುಭ ಚಟುವಟಿಕೆಗಳಿಗೆ ಇದು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಈ ಶ್ರಾವಣಮಾಸ ಮಳೆಗಾದೊಂದಿಗೆ ಪ್ರಾರಂಭವಾಗುತ್ತದೆ.
ಸಾಮನ್ಯವಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ಹೇಳಲಾಗುತ್ತದೆ. ಆದರೆ ಇದರ ಹಿಂದಿನ ಕಾರಣ ಹಲವರಿಗೆ ತಿಳಿದಿಲ್ಲ. ಮತ್ತು ಈಗ ನಾವು ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಏಕೆ ಸೇವಿಸಬಾರದು ಮತ್ತು ಕಾರಣವೇನು ಎಂದು ತಿಳಿಯೋಣ.
ಶ್ರಾವಣ ಮಾಸದಲ್ಲಿ ಅನೇಕ ಜನರು ಶಿವನನ್ನು ಪೂಜಿಸುತ್ತಾರೆ. ವರಲಕ್ಷ್ಮಿ ವ್ರತ, ಮಂಗಳ ಗೌರಿ ವ್ರತ, ನಾಗಪಂಚಮಿ, ಶ್ರೀ ಕೃಷ್ಣಾಷ್ಟಮಿ ಹೀಗೆ ಅನೇಕ ಹನ್ನಗಳ ತಿಂಗಳು ಇದಾಗಿದೆ. ಮಾಂಸಾಹಾರ ತ್ಯಜಿಸುವುದಲ್ಲದೆ, ಧಾರ್ಮಿಕ ನಂಬಿಕೆಗಳ ಪ್ರಕಾರ ಈ ತಿಂಗಳಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ನಂಬಲಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಮಾಂಸಾಹಾರವನ್ನು ಕಡಿಮೆ ಮಾಡಲು ಅನೇಕ ಆಧ್ಯಾತ್ಮಿಕ ಕಾರಣಗಳಿವೆ. ಅಲ್ಲದೆ ಈ ಋತುವಿನಲ್ಲಿ ಮಾಂಸಾಹಾರಿ ಆಹಾರ ಸೇವನೆಯನ್ನು ತಪ್ಪಿಸಲು ವೈಜ್ಞಾನಿಕ ಕಾರಣಗಳಿವೆ.
ಈ ಶ್ರಾವಣ ಮಾಸದಿಂದ ಸಾಲು ಸಾಲು ಹಬ್ಬಗಳು ಸಹ ಶುರುವಾಗುತ್ತವೆ. ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಭೀಮನ ಅಮವಾಸೆ, ನಾಗ ಪಂಚಮಿಯಂತಹ ಅನೇಕ ಪ್ರಮುಖ ಹಿಂದೂ ಹಬ್ಬಗಳು ಶ್ರಾವಣ ಮಾಸದಲ್ಲಿ ಬರುವುದರಿಂದ ಈ ತಿಂಗಳು ಮತ್ತಷ್ಟು ಪವಿತ್ರವಾಗಿದೆ. ಶ್ರಾವಣ ಮಾನವು ತನ್ನದೇ ಆಗಿರುವಗ ವಿಶೇಷತೆಯನ್ನು ಹೊಂದಿದೆ.
ಆಯುರ್ವೇದದ ಪ್ರಕಾರ, ಶ್ರಾವಣ ಸಮಯದಲ್ಲಿ ಹವಾಮಾನ ಬದಲಾವಣೆಗಳಿಂದಾಗಿ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಅಂತಹ ಸಮಯದಲ್ಲಿ ಮಾಂಸಾಹಾರಿ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ರೋಗಗಳು ಬರಬಹುದು ಎಂದು ಆಯುರ್ವೇದ ತಜ್ಞರು ಎಚ್ಚರಿಸುತ್ತಾರೆ. ಅದಕ್ಕಾಗಿಯೇ ಈ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಸಸ್ಯಾಹಾರಿ ಆಹಾರವನ್ನು ಸಸ್ಯಾಹಾರಿ ಸೇವಿಸಲು ಸೂಚಿಸಲಾಗುತ್ತದೆ.
ಈ ಋತುವಿನಲ್ಲಿ ಭಗವಾನ್ ಶಂಕರನ ಆರಾಧನೆಯಿಂದಾಗಿ, ಧಾರ್ಮಿಕ ದೃಷ್ಟಿಕೋನದಿಂದ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ವೈಜ್ಞಾನಿಕ ದೃಷ್ಟಿಯಿಂದಲೂ ಈ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು. ಈ ತಿಂಗಳಲ್ಲಿ ಸ್ವಲ್ಪ ಮಳೆಯಾಗುತ್ತದೆ. ಪರಿಸರದಲ್ಲಿ ಶಿಲೀಂಧ್ರಗಳು ಮತ್ತು ವೈರಸ್ಗಳ ಸೋಂಕು ಹೆಚ್ಚಾಗುತ್ತದೆ. ಆಹಾರವು ಬೇಗನೆ ಹಾಳಾಗುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದಾಗಿ ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮವಾಗಿದೆ. ಮಳೆಗಾಲದಲ್ಲಿ ನೀರಿನಿಂದ ಹರಡುವ ಹಲವಾರು ರೋಗಗಳು ಇವೆ ಮತ್ತು ಪ್ರಾಣಿಗಳ ಮಾಂಸವು ಕಲುಷಿತವಾಗುವ ಅಪಾಯವಿದೆ. ಪರಿಣಾಮವಾಗಿ, ಮಳೆಗಾಲದಲ್ಲಿ ಮಾಂಸಾಹಾರ ತಪ್ಪಿಸುವುದು ಉತ್ತಮ ಎನ್ನಲಾಗುತ್ತದೆ.
ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಜಲಚರ ಪ್ರಾಣಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಪರಿಸರದಲ್ಲಿ ಕೀಟಗಳು ಮತ್ತು ವೈರಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಡೆಂಗ್ಯೂ, ಚಿಕೂನ್ಗುನ್ಯಾದಂತಹ ಅನೇಕ ರೋಗಗಳು ಬರಲು ಪ್ರಾರಂಭಿಸುತ್ತವೆ, ಇದರಿಂದಾಗಿ ಪ್ರಾಣಿಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಅವುಗಳ ಮಾಂಸವನ್ನು ತಿನ್ನುವುದು ಹಾನಿಕಾರಕ ಎಂದು ಹೇಳಾಗುತ್ತದೆ.
ಶ್ರಾವಣವನ್ನು ಹಿಂದೂ ಧರ್ಮದಲ್ಲಿ ಪವಿತ್ರ ತಿಂಗಳು ಎಂದು ಮತ್ತು ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಜೀವಿಗಳನ್ನು ಕೊಲ್ಲುವುದು ತಪ್ಪು ಎಂದು ಪರಿಗಣಿಸಲ್ಪಟ್ಟಿರುವುದರಿಂದ ಜನರು ಮಾಂಸಾಹಾರ ಊಟವನ್ನು ಶ್ರಾವಣ ಮಾಸದಲ್ಲಿ ತ್ಯಜಿಸುತ್ತಾರೆ. ಹಿಂದೂ ಧರ್ಮದಲ್ಲಿ ಸಸ್ಯಹಾರಿಗಳು, ಮಾಂಸಾಹಾರಿಗಳು ಇಬ್ಬರೂ ಇದ್ದಾರೆ. ಈ ಮಾಸದಲ್ಲಿ ಮಾಂಸಾಹಾರಿಗಳು ಸಹ ಸಂಪೂರ್ಣವಾಗಿ ಆ ಆಹಾರವನ್ನು ತ್ಯಜಿಸುತ್ತಾರೆ. ಕಾರಣ ಇಷ್ಟೇ ಗೌರವ ಮತ್ತು ನಂಬಿಕೆಯ ಸಮರ್ಪಣೆಗಾಗಿ ಪವಿತ್ರ ಮಾಸ ಶ್ರಾವಣದಲ್ಲಿ ಮಾಂಸವನ್ನು ತಿನ್ನುವುದನ್ನು ಬಿಡಲು ಸಲಹೆ ನೀಡಲಾಗುತ್ತದೆ.
ಆಹಾರ ಪದ್ಧತಿ ವೈಯಕ್ತಿಕ ಆಯ್ಕೆಯಾಗಿದ್ದರೂ ಸಹ ನಮ್ಮ ಪುರಾತನ ಭಗವದ್ಗೀತೆ, ವೇದ, ಪುರಾಣ ಮತ್ತು ಮಹಾಭಾರತದಂತಹ ಹಿಂದೂ ಧರ್ಮಗ್ರಂಥಗಳ ಕೆಲವು ಭಾಗಗಳಲ್ಲಿ ಮಾಂಸ ಸೇವನೆಗೆ ಖಂಡನೆ ಇದೆ. ಉದಾಹರಣೆಗೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನ ಸಸ್ಯಾಹಾರದ ಆಯ್ಕೆಯನ್ನು ಘೋಷಿಸುವ ಒಂದು ಭಾಗದಲ್ಲಿ ‘ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನು ನನಗೆ ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ, ಸಾಕು ನಾನು ಅದನ್ನು ಸ್ವೀಕರಿಸುತ್ತೇನೆ.’ ಎಂದು ಹೇಳುವ ಪ್ರಸಂಗವಿದೆ. ಹೀಗಾಗಿ ಪವಿತ್ರ ಮಾಸದಲ್ಲಿ ಹಿಂದೂಗಳು ದೇವರ ಕೃಪೆಗೆ ಪಾತ್ರರಾಗಲು ಮಾಂಸಾಹಾರವನ್ನು ತ್ಯಜಿಸುತ್ತಾರೆ.
ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಜಲಚರ ಪ್ರಾಣಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಪರಿಸರದಲ್ಲಿ ಕೀಟಗಳು ಮತ್ತು ವೈರಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಡೆಂಗ್ಯೂ, ಚಿಕೂನ್ಗುನ್ಯಾದಂತಹ ಅನೇಕ ರೋಗಗಳು ಬರಲು ಪ್ರಾರಂಭಿಸುತ್ತವೆ, ಇದರಿಂದಾಗಿ ಪ್ರಾಣಿಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಅವುಗಳ ಮಾಂಸವನ್ನು ತಿನ್ನುವುದು ಹಾನಿಕಾರಕ.
ಶ್ರಾವಣವನ್ನು ಹಿಂದೂ ಧರ್ಮದಲ್ಲಿ ಪವಿತ್ರ ತಿಂಗಳು ಎಂದು ಮತ್ತು ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಜೀವಿಗಳನ್ನು ಕೊಲ್ಲುವುದು ಅನೈತಿಕವೆಂದು ಪರಿಗಣಿಸಲ್ಪಟ್ಟಿರುವುದರಿಂದ ಜನರು ಮಾಂಸಾಹಾರ ಊಟವನ್ನು ಶ್ರಾವಣ ಮಾಸದಲ್ಲಿ ತ್ಯಜಿಸುತ್ತಾರೆ. ಹಿಂದೂ ಧರ್ಮದಲ್ಲಿ ಸಸ್ಯಹಾರಿಗಳು, ಮಾಂಸಾಹಾರಿಗಳು ಇಬ್ಬರೂ ಇದ್ದಾರೆ. ಈ ಮಾಸದಲ್ಲಿ ಮಾಂಸಾಹಾರಿಗಳು ಸಹ ಸಂಪೂರ್ಣವಾಗಿ ಆ ಆಹಾರವನ್ನು ತ್ಯಜಿಸುತ್ತಾರೆ. ಕಾರಣ ಇಷ್ಟೇ ಗೌರವ ಮತ್ತು ನಂಬಿಕೆಯ ಸಮರ್ಪಣೆಗಾಗಿ ಪವಿತ್ರ ಮಾಸ ಶ್ರಾವಣದಲ್ಲಿ ಮಾಂಸವನ್ನು ತಿನ್ನುವುದನ್ನು ಬಿಡಲು ಸಲಹೆ ನೀಡಲಾಗುತ್ತದೆ.
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸದಿರುವುದರ ಹಿಂದೆ ಕೆಲವು ವೈಜ್ಞಾನಿಕ ಮತ್ತು ಆರೋಗ್ಯ ಕಾರಣಗಳು ಹಾಗೂ ಧಾರ್ಮಿಕ ನಂಬಿಕೆಗಳಿವೆ.
