ಸೆ. 29, 2025 : ಸಿಡ್ಬಿ (ಭಾರತೀಯ ಸಣ್ಣ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ) ತನ್ನ ರಾಷ್ಟ್ರೀಯ ಯೋಜನೆ ಡೆವಲಪ್ಮೆಂಟ್ ಆಫ್ ಇಂಡಸ್ಟ್ರಿ ಅಸೋಸಿಯೇಶನ್(ಡಿಐಎ) ಮೂಲಕ ಕಡಿಮೆ ವೆಚ್ಚದ, ನಾವಿನ್ಯವಾದ ಮತ್ತು ಸ್ವಯಂ ಚಾಲಿತ ಕ್ಲಸ್ಟರ್ ಮಾದರಿಯನ್ನು ಅಭಿವೃದ್ದಿಪಡಿಸಿದೆ. ನವದೆಹಲಿಯಲ್ಲಿ ಸೆಕ್ರೆಟರಿ ಡಿಎಫ್ಎಸ್ , ಹಣಕಾಸು ಇಲಾಖೆಯ ಶ್ರೀ ಎಮ್ ನಾಗರಾಜು ಡಿಐಎ ಮೇಲಿನ ರಾಷ್ಟ್ರೀಯ ಕಾನ್ಕ್ಲೇವ್ ಉದ್ಘಾಟಿಸಿದರು.
ಈ ಕಾನ್ಕ್ಲೇವ್ನಲ್ಲಿ 4 ಈಶಾನ್ಯ ರಾಜ್ಯದ 8 ಇಂಡಸ್ಟ್ರಿ ಅಸೋಸಿಯೇಶನ್ ಸೇರಿ ರಾಷ್ಟ್ರದಾದ್ಯಂತ 90 ಇಂಡಸ್ಟ್ರಿ ಅಸೋಸಿಯೇಶನ್ನ 125 ಪ್ರತಿನಿಧಿಗಳು ಭಾಗವಹಿಸಿದ್ದರು. ಇಂಡಸ್ಟ್ರಿ ಅಸೋಸಿಯೇಶನ್ ಇಂಜಿನಿಯರಿಂಗ್, ಪ್ಲಾಸ್ಟಿಕ್, ಪ್ರಿಂಟಿಂಗ್, ಟೆಕ್ಸ್ಟೈಲ್ಸ್, ಆಹಾರ ಸಂಸ್ಕರಣೆ, ಪೀಠೋಪಕರಣ, ಜ್ಯುವೆಲ್ಲರಿ, ಎಲೆಕ್ಟ್ರಾನಿಕ್ಸ್ ಇತ್ಯಾದಿ ವಿಭಾಗವನ್ನು ಪ್ರತಿನಿಧಿಸಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಡ್ಬಿ, ಸಿಎಮ್ಡಿ ಶ್ರೀ ಮನೋಜ್ ಮಿತ್ತಲ್ “ ಬಲಿಷ್ಟವಾದ ಕ್ಲಸ್ಟರ್ಗೆ ಬಲಿಷ್ಠ ಅಸೋಸಿಯೇಶನ್ನ ಅಗತ್ಯವಿದೆ. ಸಿಡ್ಬಿ ಎರಡು ತಂತ್ರಗಾರಿಕೆಯನ್ನು ಅನುಸರಿಸಲಿದೆ. ಮೊದಲು ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲ, ಬೇಡಿಕೆ ಆಧಾರಿತ ಆರಂಭಿಕ ಚಟುವಟಿಕೆಗಳಿಗಾಗಿ ಇಂಡಸ್ಟ್ರಿ ಅಸೋಸಿಯೇಶನ್ ಬೆಂಬಲಿಸುವುದು . ಎರಡನೇಯದಾಗಿ ಪೋರ್ಟಲ್ ಮೂಲಕ ಇಂಡಸ್ಟ್ರಿಯಲ್ ಇಕೊ ಸಿಸ್ಟೆಮ್ನ್ನು ಡಿಜಿಟಲ್ ಆಧಾರದಲ್ಲಿ ಬಲಗೊಳಿಸುವುದು. ಈ ಪೋರ್ಟಲ್ ಎಲ್ಲಾ ನೋಂದಾಯಿತ ಸಂಘಗಳು ಮತ್ತು ಅವುಗಳ ಸದಸ್ಯರು ತಮ್ಮ ಆಸಕ್ತಿಯ ವಿಷಯಗಳ ಬಗ್ಗೆ ಭಾಗವಹಿಸಲು ಮತ್ತು ಸಂಶೋಧನೆ ಮಾಡಲು, ನೆಟ್ವರ್ಕಿಂಗ್ ಮತ್ತು ಕಲಿಕೆ, ನವೀಕರಿಸಿದ ಮಾಹಿತಿಯನ್ನು ಪಡೆಯಲು ಮತ್ತು ಪೋಸ್ಟ್ ಮಾಡಲು ಮತ್ತು ಅವರ ಆರ್ಥಿಕ ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ” ಎಂದರು. ಮುಮದುವರೆದು ಮಾತನಾಡಿದ ಮಿತ್ತಲ್, ಕ್ರಿಯಾ ಯೋಜನೆ, ಸದಸ್ಯರಿಗೆ ಕಾರ್ಯತಂತ್ರದ ಸೇವೆಯನ್ನು ಒದಗಿಸುವ ಹಣಕಾಸು ಸುಸ್ಥಿರ ಇಂಡಸ್ಟ್ರಿಯಲ್ ಅಸೋಸಿಯೇಶನ್ ಸೃಷ್ಟಿಸುವುದು ನಮ್ಮ ಅಂತಿಮ ಗುರಿಯಾಗಿದೆ.
ಇದಕ್ಕೂ ಮುನ್ನ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದ ಡಿಎಫ್ಎಸ್ ಕಾರ್ಯದರ್ಶಿ ಶ್ರೀ ಎಂ ನಾಗರಾಜು, “ಭಾರತವು ನಮ್ಮ ಸ್ಪರ್ಧಾತ್ಮಕ ಅನುಕೂಲಗಳ ಕ್ಷೇತ್ರಗಳಲ್ಲಿ ಉತ್ಪಾದನಾ ಕೇಂದ್ರಗಳಿಂದ ನಾವೀನ್ಯತೆಯ ಕೇಂದ್ರಗಳಾಗಿ ವಿಕಸನಗೊಳ್ಳಬೇಕಾಗಿದೆ ಎಂದು ಹೇಳಿದರು. ಕ್ಲಸ್ಟರ್ ಅಭಿವೃದ್ಧಿ ನಾಲ್ಕು ಹಂತಗಳ ಮೂಲಕ ಹಾದುಹೋಗುತ್ತದೆ: ಪ್ರಾರಂಭ, ಸ್ಥಾಪನೆ, ಕಾರ್ಯಾಚರಣೆ ಮತ್ತು ರೂಪಾಂತರ. ಅನೇಕ ಭಾರತೀಯ ಕ್ಲಸ್ಟರ್ಗಳು ಸ್ಥಾಪನೆ ಅಥವಾ ಕಾರ್ಯಾಚರಣೆಯ ಹಂತದಲ್ಲಿವೆ. ಕೈಗಾರಿಕಾ ಸಂಘಗಳು ಕ್ಲಸ್ಟರ್ಗಳನ್ನು ಪರಿವರ್ತನೆಯ ಹಂತಕ್ಕೆ ಮಾರ್ಗದರ್ಶನ ಮಾಡುವ ಟಾರ್ಚ್ಬೇರರ್ಗಳಾಗಬೇಕು, ಅಲ್ಲಿ ಅವು ಸ್ಥಳೀಯ ಅಗತ್ಯಗಳನ್ನು ಪೂರೈಸುವುದಲ್ಲದೆ ಜಾಗತಿಕ ಮೌಲ್ಯ ಸರಪಳಿಗಳನ್ನು ರೂಪಿಸುತ್ತವೆ. ನಮ್ಮ ಅನೇಕ ಸಂಘಗಳು ಪ್ರಮಾಣ, ಆರ್ಥಿಕ ಸುಸ್ಥಿರತೆ ಮತ್ತು ಆಧುನಿಕ ಸೇವಾ ವಿತರಣಾ ಸಾಮರ್ಥ್ಯವನ್ನು ಹೊಂದಿಲ್ಲ. ನಿಜವಾಗಿಯೂ ಎಂಎಸ್ಎಂಇಗಳನ್ನು ಸಬಲೀಕರಣಗೊಳಿಸಲು, ನಾವು ನಮ್ಮ ಸಂಘಗಳ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಹೂಡಿಕೆ ಮಾಡಬೇಕು” ಎಂದರು.
ಚರ್ಚೆಯಲ್ಲಿ, ನಿವೃತ್ತ ವೃತ್ತಿಪರರ ಸೇವೆಗಳನ್ನು ಬಳಸಿಕೊಳ್ಳುವ ಎಂಎಸ್ಎಂಇ ಪರಿಹಾರ ಕೇಂದ್ರ, ಕಾರ್ಮಿಕರೊಂದಿಗೆ ಹಂಚಿಕೆ ಮಾದರಿಗಳನ್ನು ಪಡೆಯುವುದು, ಅನಗತ್ಯ ದಾಖಲೆಗಳನ್ನು ತೆಗೆದುಹಾಕುವುದು, ಸೇವಾ ಪೂರೈಕೆದಾರರಿಂದ ರಾಯಲ್ಟಿ ಗಳಿಸುವುದು, ಅತ್ಯಂತ ನಿರ್ಣಾಯಕ ಸೇವೆಗಳನ್ನು ಒದಗಿಸುವ ಮೂಲಕ ಶುಲ್ಕವನ್ನು ಪಡೆಯುವುದು ಮುಂತಾದ ವಿವಿಧ ನವೀನ ಮಾದರಿಗಳನ್ನು ಕೈಗಾರಿಕಾ ಸಂಘಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ಹೊಸ ಕ್ಷೇತ್ರಗಳಾಗಿ ಗುರುತಿಸಲಾಯಿತು.

[…] […]