ಕೆ.ಆರ್.ಪೇಟೆ : ಮಂಡ್ಯ ನಗರದಲ್ಲಿ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದಿಂದ ನೂತನ ಭವನ ಕಟ್ಟಡ ಕಾಮಗಾರಿಗೆ ಧನ ಸಹಾಯಕ್ಕೆ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ ಮನವಿ ಮಾಡಿದ ಹಿನ್ನೆಲೆ .
ಕೆ.ಆರ್.ಪೇಟೆ ಪಟ್ಟಣ ಜಯನಗರ ಬಡಾವಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಸಮಾಜ ಸೇವಕ ಆರ್.ಟಿ ಓ ಮಲ್ಲಿಕಾರ್ಜುನ್ ನೂತನ ಭವನಕ್ಕೆ ಆರ್ಥಿಕ ಸಹಾಯ ನೀಡಿ ಮಾತನಾಡಿದ ಅವರು ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಯ ಪೂರ್ವಭಾಗದ ನಿವೇಶನದಲ್ಲಿ ಸುಮಾರು 90, ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಅಧ್ಯಕ್ಷರು ಹಾಗೂ ಸದಸ್ಯರ ಪರಿಶ್ರಮದಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.ಸರ್ಕಾರಿ ಪ್ರಾಮಾಣಿಕ ಸೇವೆಯ ಜೊತೆಗೆ ಸಂಘದಲ್ಲೂ ಕ್ರಿಯಾಶೀಲತೆಯಾಗಿ ತೊಡಗಿಕೊಂಡು ಮುಂಬರುವ ನೌಕರರಿಗೂ ಮಾದರಿಯಾಗುವ ರೀತಿಯಲ್ಲಿ ನಿಮ್ಮ ಪರಿಶ್ರಮ ಪ್ರಮಾಣಿಕ್ಯತೆ ಸಿಕ್ಕ ಫಲಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಸ್ವೀಕರಿಸುವ ಕೈ ಶುದ್ಧವಿದ್ದರೆ ಕೊಡುವ ಮನಸು ಕೂಡ ಧಾರಾಳವಾಗಿರುತ್ತೆ ಎಂಬ ಪದಕ್ಕೆ ಮಂಡ್ಯ ಜಿಲ್ಲಾ ಕಂದಾಯ ಇಲಾಖೆ ನೌಕರರು ಸಾಕ್ಷಿಯಾಗಿದ್ದಾರೆ ಎಂದರು.

ಬಳಿಕ ಮಾತನಾಡಿದ ಜಿಲ್ಲಾ ಕಂದಾಯ ಇಲಾಖೆಯ ಸಂಘದ ಜಿಲ್ಲಾಧ್ಯಕ್ಷ ತಂಮ್ಮಣ್ಣಗೌಡ ಸಮಾಜ ಸೇವ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ನಿತ್ಯ ಪ್ರಾಮಾಣಿಕ ಸರ್ಕಾರಿ ಕರ್ತವ್ಯ ಜೊತೆಗೆ ಬಡವರ ಕಷ್ಟದ ಸಮಯದಲ್ಲಿ ತಮ್ಮ ಕೈಲಾದ ಅಳಿಲು ಸೇವೆಯ ಸಲ್ಲಿಸಿ ಕೆ.ಆರ್. ಪೇಟೆ ತಾಲೂಕಿನಲ್ಲೆ ಜನಾನುರಾಗಿದ್ದಾರೆ ಎಂಬುದನ್ನು ತಿಳಿದಿದ್ದು ಆದರೆ ನಮ್ಮ ಸಂಘದ ನೂತನ ಭವನಕ್ಕೆ ಸಹಕಾರ ನೀಡಿ ಎಂದು ಮನವಿ ನೀಡಿದ ತಕ್ಷಣ ಸ್ಪಂದಿಸಿ ಕಟ್ಟಡ ಕಾಮಗಾರಿಗೆ ಸಹಾಯ ನೀಡಿದ್ದಾರೆ ಇಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರಕಿ ಮತ್ತಷ್ಟು ಜನರ ಸೇವೆ ಮಾಡುವ ಶಕ್ತಿ ನೀಡಲಿ ಎಂದು ತತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಂಮ್ಮಣ್ಣಗೌಡ, ಉಪ ತಹಸೀಲ್ದಾರ್ ಜಯಕುಮಾರ್,ರಾಜಶ್ವ ನಿರೀಕ್ಷರಾದ ಚಂದ್ರಕಲಾ,ನರೇಂದ್ರ ಕುಮಾರ್,ಗ್ರಾಮ ಲೆಕ್ಕ ಅಧಿಕಾರಿ ಜಗದೀಶ್,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
